ಜನಪ್ರಿಯ ನಾಯಕ

ದೀನದಲಿತರ ಧ್ವನಿ:
ಶ್ರೀ ಎಸ್. ಬಂಗಾರಪ್ಪ

ಹಿಂದುಳಿದ ವರ್ಗಗಳ ಆಶಾಕಿರಣ, ಗ್ರಾಮೀಣ ಕಲ್ಯಾಣದ ಹರಿಕಾರ ಹಾಗೂ ಕರ್ನಾಟಕದ 12ನೇ ಮುಖ್ಯಮಂತ್ರಿಗಳು. ತಮ್ಮ ನಿರ್ಭೀತ ಸಮಾಜವಾದಿ ಸಿದ್ಧಾಂತಗಳ ಮೂಲಕ ನಮ್ಮ ರಾಜ್ಯದ ಭವಿಷ್ಯವನ್ನು ಮರುರೂಪಿಸಿದ ಧೀಮಂತ ನಾಯಕ.

ಸಾಮಾಜಿಕ ನ್ಯಾಯಕ್ಕಾಗಿ ಆರಂಭವಾದ ಸುದೀರ್ಘ ರಾಜಕೀಯ ಹೋರಾಟವೊಂದು ತಂದೆಯಿಂದ ಆರಂಭವಾಗಿ, ಮಗನ ಮೂಲಕ ಇಂದೂ ಜೀವಂತವಾಗಿದೆ. ಅಂದಿನ ಐತಿಹಾಸಿಕ ದೂರದೃಷ್ಟಿಯೇ ಇಂದಿನ 'ಶಿಕ್ಷಣ ಗ್ಯಾರಂಟಿ'ಗಳಿಗೆ ನಿಜವಾದ ಸ್ಫೂರ್ತಿ.

Shri S. Bangarappa
ಸಮಾಜವಾದದ ಮೂಲ ಸೆಲೆ

ಈ ನೆಲದ ನಿಷ್ಕಳಂಕ ಚೇತನ

ಬಂಡಾಯದ ಹಾದಿ

ಸೊರಬ ತಾಲೂಕಿನ ಕುಬಟೂರಿನಲ್ಲಿ ಜನನ. ರಾಮ್ ಮನೋಹರ್ ಲೋಹಿಯಾ ಮತ್ತು ಶಾಂತವೇರಿ ಗೋಪಾಲಗೌಡ ಅವರ ಆಳವಾದ ಸಮಾಜವಾದಿ ಸಿದ್ಧಾಂತಗಳಿಂದ ಪ್ರೇರಿತರಾಗಿ ಸಾರ್ವಜನಿಕ ಜೀವನಕ್ಕೆ ಪ್ರವೇಶ.

ಸಾಂಸ್ಕೃತಿಕ ನಾಯಕ

ಹೃದಯವಂತ ಕಲಾವಿದ. ತರಬೇತಿ ಪಡೆದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಗಾರ ಮತ್ತು ಕ್ರೀಡಾ ಪ್ರೇಮಿ. ಚಾಣಾಕ್ಷ ರಾಜಕೀಯ ನಡೆಗಳ ನಡುವೆಯೂ ಸಾಂಸ್ಕೃತಿಕ ಮೌಲ್ಯಗಳನ್ನು ಕಾಪಿಟ್ಟುಕೊಂಡ ಮುತ್ಸದ್ದಿ

ಸಾಮಾಜಿಕ ನ್ಯಾಯ

ತಮ್ಮ ರಾಜಕೀಯದ ಜೀವನದುದ್ದಕ್ಕೂ 'ಸಾಮಾಜಿಕ ನ್ಯಾಯ'ಕ್ಕಾಗಿ ಹೋರಾಟ ನಡೆಸಿದವರು. ಹಿಂದುಳಿದ ವರ್ಗಗಳ ಏಳಿಗೆಗೆ ಅಡ್ಡಿಯಾಗಿದ್ದ ಶತ ಶತಮಾನಗಳಷ್ಟು ಹಳೆಯ ಸಾಂಸ್ಥಿಕ ವ್ಯವಸ್ಥೆಯನ್ನು ಮೀರಿ ನಿಂತವರು.

ಮಹಾ ಪಯಣ

ಧೀಮಂತ ನಾಯಕನ ಸಾಧನೆಗಳು

1932

ಕುಬಟೂರಿನಲ್ಲಿ ಜನನ

ಶಿವಮೊಗ್ಗ ಜಿಲ್ಲೆಯ ಕೃಷಿ ಕುಟುಂಬವೊಂದರಲ್ಲಿ ಜನಿಸಿದರು. ಗ್ರಾಮೀಣ ಭಾಗದ ಬಡತನ ಮತ್ತು ಶೋಷಣೆಗಳನ್ನು ತೀರಾ ಹತ್ತಿರದಿಂದ ಕಂಡ ಇವರು, ತಮ್ಮ ಆರಂಭಿಕ ಜೀವನದಲ್ಲೇ ಗ್ರಾಮೀಣ ಬದುಕಿನ ಸವಾಲು, ಸಮಸ್ಯೆಗಳನ್ನು ಆಳವಾಗಿ ಗ್ರಹಿಸಿದ್ದರು..

1967

ವಿಧಾನಸಭೆಗೆ ಪ್ರವೇಶ

ಸಮಾಜವಾದಿ ಪಕ್ಷದ (Socialist Party) ಪ್ರತಿನಿಧಿಯಾಗಿ ಸೊರಬ ಕ್ಷೇತ್ರದಿಂದ ಮೊದಲ ಬಾರಿಗೆ ವಿಧಾನಸಭೆಗೆ ಆಯ್ಕೆ. ತಮ್ಮ ಪ್ರಖರ ಮತ್ತು ಪ್ರಕರ ಮಾತಿನ ಮೂಲಕ ಸದನದಲ್ಲಿ ತಕ್ಷಣವೇ ಎಲ್ಲರ ಗಮನ ಸೆಳೆದರು.

1978

ಲೋಕೋಪಯೋಗಿ ಸಚಿವ

ಲೋಕೋಪಯೋಗಿ ಇಲಾಖೆಯ (PWD) ಸಚಿವರಾಗಿ ಅಧಿಕಾರ ಸ್ವೀಕಾರ. ರಾಜ್ಯದ ಗ್ರಾಮೀಣ ರಸ್ತೆ ಸಂಪರ್ಕ ಜಾಲವನ್ನು ಬೃಹತ್ ಮಟ್ಟದಲ್ಲಿ ವಿಸ್ತರಿಸಲು ಸಮಗ್ರವಾದ ಯೋಜನೆ ರೂಪಿಸಿ, ಜಾರಿಗೆ ತಂದರು.

1990 — 1992

ಕರ್ನಾಟಕದ 12ನೇ ಮುಖ್ಯಮಂತ್ರಿ

ಜನಕಲ್ಯಾಣ ಆಡಳಿತದ ಸುವರ್ಣ ಯುಗ. ಜನಪರವಾದ ಕಾನೂನುಗಳನ್ನು ರೂಪಿಸಿ, ಸರ್ವಜನರ ಹಿತಕಾಯುವ ಆಡಳಿತ ನಡೆಸಿದ್ದರು. ಅತ್ಯಂತ ಹಿಂದುಳಿದವರಿಗಾಗಿ ಮತ್ತು ಬಡವರಿಗಾಗಿ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದರು. ವಸತಿ ಹೀನರಿಗೆ ʻಆಶ್ರಯʼ ಯೋಜನೆಯಡಿ ಆಶ್ರಯ ಕಲ್ಪಿಸಿದರು. ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸಲು ವಿಶೇಷ ಯೋಜನೆಗಳು ಜಾರಿಗೆ ಬಂದವು.

1996

ರಾಷ್ಟ್ರೀಯ ರಾಜಕಾರಣಕ್ಕೆ ಪ್ರವೇಶ

ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆ.ರಾಷ್ಟ್ರ ಮಟ್ಟದಲ್ಲಿ ದೇಶದ ಅತ್ಯಂತ ತಳಸಮುದಾಯಗಳ ಮತ್ತು ಹಿಂದುಳಿದ ವರ್ಗಗಳ ಪ್ರಾತಿನಿಧಿಯಾಗಿ ಕಾರ್ಯನಿರ್ವಹಿಸಿದರು. ಸಂಸತ್ತಿನಲ್ಲಿ ರಾಜ್ಯದ ಸಮಸ್ಯೆಗಳನ್ನು ಪ್ರಸ್ತಾಪಿಸಿ, ದೇಶದ ಗಮನ ಸೆಳೆದರು.

ನೀತಿಗಳ ಅಮೂಲಾಗ್ರ ಬದಲಾವಣೆ

ಚಾರಿತ್ರಿಕ ಜನಕಲ್ಯಾಣದ ಕಾಲಘಟ್ಟ

ಗ್ರಾಮೀಣ ಕರ್ನಾಟಕದ ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆಯನ್ನೇ ಸಮಗ್ರವಾಗಿ ಮರುರೂಪಿಸಿದ, ಆಡಳಿತಾತ್ಮಕವಾಗಿ ಕ್ರಾಂತಿಕಾರಿಯಾಗಿದ್ದ ತೀರ್ಮಾನ ಮತ್ತು ಯೋಜನೆಗಳ ಕುರಿತ ಸಂಕ್ಷಿಪ್ತ ಮಾಹಿತಿ.

Ashraya Scheme

ಆಶ್ರಯ ಯೋಜನೆ

ಸಮಾಜದ ತಳಮಟ್ಟದ ಕಟ್ಟಕಡೆಯ ವ್ಯಕ್ತಿಯ ಸ್ವಂತ ಮನೆಯನ್ನು ಹೊಂದುವ ಹಕ್ಕನ್ನು ಸಾಕಾರಗೊಳಿಸಿದ, ಎಲ್ಲರಿಗೂ ವಸತಿ ಭದ್ರತೆಯನ್ನು ಒದಗಿಸುವ ಚಾರಿತ್ರಿಕ ತೀರ್ಮಾನ ತೆಗೆದುಕೊಂಡ ನಿರ್ನಾಯಕ ಕಾಲಘಟ್ಟ.

ಈ ಐತಿಹಾಸಿಕ ಯೋಜನೆಯ ಜಾರಿಗೆ ಮುನ್ನ, ಲಕ್ಷಾಂತರ ಕೃಷಿ ಕಾರ್ಮಿಕರು ಮತ್ತು ಹಿಂದುಳಿದ ವರ್ಗಗಳ ಸಮುದಾಯದವರು ವಾಸಕ್ಕೆ ಯೋಗ್ಯವಾದ ಮನೆಗಳಿಲ್ಲದೆ, ವಾಸಸ್ಥಳದ ಹಕ್ಕು ಇಲ್ಲದೆ ಹುಲ್ಲಿನ ಗುಡಿಸಲುಗಳಲ್ಲಿ ನೆಲೆಸಿದ್ದರು. ಶ್ರೀ ಎಸ್. ಬಂಗಾರಪ್ಪನವರು ಎಲ್ಲರಿಗೂ ಸುರಕ್ಷಿತ ವಸತಿ ವ್ಯವಸ್ಥೆ ಕಲ್ಪಿಸಬೇಕೆಂಬ ಉದ್ದೇಶದಿಂದ ಪ್ರತ್ಯೇಕ 'ವಸತಿ ಮಂಡಳಿ'ಯನ್ನು ಸ್ಥಾಪಿಸಿದರು. ವಸತಿ ಯೋಗ್ಯ ಸರ್ಕಾರಿ ಭೂಮಿಯನ್ನು ಗುರುತಿಸಿ, ಅವುಗಳನ್ನು ಕಾನೂನುಬದ್ಧ ನಿವೇಶನಗಳಾಗಿ ವಿಂಗಡಿಸಿ, ಶಾಶ್ವತವಾದ ಕಾಂಕ್ರೀಟ್ ಮನೆಗಳನ್ನು ನಿರ್ಮಿಸಿ, ಸೂಕ್ತ ದಾಖಲೆಗಳೊಂದಿಗೆ ಅವುಗಳನ್ನು ಫಲಾನುಭವಿಗಳಿಗೆ ಒದಗಿಸಿದರು.

ಮುಖ್ಯ ಗುರಿ ಭೂ ರಹಿತ ಗ್ರಾಮೀಣ ಕುಟುಂಬಗಳು, ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡ (ST) ಕುಟುಂಬಗಳು, ಆರ್ಥಿಕವಾಗಿ ಹಿಂದುಳಿದ ದುರ್ಬಲ ವರ್ಗದವರು (EWS)
ಸಾಮಾಜಿಕ-ಆರ್ಥಿಕ ಪರಿಣಾಮ ಇದು ತಲೆಮಾರುಗಳ ಸುಭದ್ರ ಭವಿಷ್ಯಕ್ಕೆ ನಾಂದಿ ಹಾಡಿದೆ. ಜನರ ಆರೋಗ್ಯವನ್ನು ಉತ್ತಮಪಡಿಸಿದೆ ಮತ್ತು ಪ್ರತಿಯೊಬ್ಬರಿಗೂ ಸಮಾಜದಲ್ಲಿ ಸಾಮಾಜಿಕ ಗೌರವವನ್ನು ತಂದುಕೊಟ್ಟಿದೆ.
Aradhana Scheme

ಆರಾಧನಾ ಯೋಜನೆ

ಸಮುದಾಯಗಳ ಸಬಲೀಕರದ ನಿಟ್ಟಿನಲ್ಲಿ ಐತಿಹಾಸಿಕವಾಗಿ ವಂಚಿತರಿಗೆ ಸಾಂಸ್ಕೃತಿಕ ಸಮಾನತೆ ಮತ್ತು ಘನತೆಯ ಆಸರೆ

ಐತಿಹಾಸಿಕ ತಾರತಮ್ಯತೆಯು ಸಮುದಾಯದಗಳ ಅಂತರಾಳದವರೆಗೂ ಆಳವಾಗಿ ವ್ಯಾಪಿಸಿತ್ತು ಎಂಬುದನ್ನು ಮನಗಂಡು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಅಲ್ಪಸಂಖ್ಯಾತ ಹಿಂದುಳಿದ ವರ್ಗಗಳ ವಸತಿ ಪ್ರದೇಶಗಳಲ್ಲಿ ನೂತನ ಸಮುದಾಯ ಭವನ ನಿರ್ಮಾಣ ಹಾಗೂ ಆರಾಧನಾ ಮಂದಿರಗಳ ದುರಸ್ತಿ ಮತ್ತು ಜೀರ್ಣೋದ್ಧಾರಕ್ಕಾಗಿ 'ಆರಾಧನಾ ಯೋಜನೆ'ಯಡಿ ವಿಶೇಷ ಅನುದಾನವನ್ನು ಒದಗಿಸಲಾಯಿತು. ಈ ಕಾರ್ಯಕ್ರಮವು ತುಳಿತಕ್ಕೊಳಗಾದ ಸಮುದಾಯದವರಲ್ಲಿ ಭದ್ರತೆಯ ಭಾವ ಮೂಡಿಸಿದ್ದಲ್ಲದೆ, ಸಾಮಾಜಿಕ ಗೌರವವನ್ನು ತಂದುಕೊಟ್ಟಿತ್ತು. ಈ ಮೂಲ ಸೌಕರ್ಯಗಳು ಬಹು ಕಾಲದಿಂದ ನಡೆದುಬಂದಿದ್ದ ತಾರತಮ್ಯತೆಯ ಗೆರೆಯನ್ನು ಅಳಿಸಿಹಾಕಿತ್ತು.

ಮುಖ್ಯ ಗುರಿ ನಿರ್ಲಕ್ಷಿತ ಗ್ರಾಮೀಣ ಪ್ರದೇಶಗಳು ಮತ್ತು ಐತಿಹಾಸಿಕವಾಗಿ ತಾರತಮ್ಯತೆಗೆ ಒಳಗಾಗಿದ್ದ ಸಮುದಾಯಗಳ ವಸತಿ ಪ್ರದೇಶಗಳು.
ಸಾಮಾಜಿಕ-ಆರ್ಥಿಕ ಪರಿಣಾಮ ಈ ಯೋಜನೆ ಸಮುದಾಯಗಳಲ್ಲಿ ಸಾಂಸ್ಕೃತಿಕ ಒಳಗೊಳ್ಳುವಿಕೆಯನ್ನು ಹೆಚ್ಚಿಸಿದೆ, ಒಗ್ಗಟ್ಟನ್ನು ಮೂಡಿಸಿದೆ ಮತ್ತು ಪ್ರಾದೇಶಿಕ ಸಮಾನತೆಗೆ ಗಟ್ಟಿ ಮುನ್ನುಡಿ ಬರೆದಿದೆ.
Vishwa Scheme

ವಿಶ್ವ ಯೋಜನೆ

ಸಾಂಪ್ರದಾಯಿಕ ಕುಶಲಕರ್ಮಿಗಳ ಶೋಷಣೆ ಮುಕ್ತಿಗೆ ಮತ್ತು ಅವರ ಏಳಿಗೆಗೆ ಬೃಹತ್ ಗ್ರಾಮೀಣ ಕೈಗಾರಿಕಾ ಕ್ರಾಂತಿ.

ವಿಶ್ವ ಯೋಜನೆ"ಯು ಗ್ರಾಮೀಣ ನೇಕಾರರು, ಕಮ್ಮಾರರು, ಕುಂಬಾರರು ಮತ್ತು ಸಾಂಪ್ರದಾಯಿಕ ಕುಶಲಕರ್ಮಿಗಳನ್ನು ಆರ್ಥಿಕವಾಗಿ ಸಬಲಗೊಳಿಸಲು ಜಾರಿಗೆ ತರಲಾಗಿದ್ದ ಒಂದು ದೂರದರ್ಶಿತ್ವದ ಬೃಹತ್ ಯೋಜನೆ. ಈ ಯೋಜನೆಯು ಕೇವಲ ತಾತ್ಕಾಲಿಕ ಸಬ್ಸಿಡಿಗಳನ್ನು ನೀಡುವುದಕ್ಕೆ ಸೀಮಿತವಾಗದೆ, ಸರ್ಕಾರಿ ಸಂಸ್ಥೆಗಳ ಮೂಲಕ ಅತ್ಯಂತ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ಒದಗಿಸುವ ಕ್ರಮವನ್ನು ಒಳಗೊಂಡಿತ್ತು.ಜೊತೆಗೆ ಅವರ ಕೌಶಲ್ಯಕ್ಕೆ ತಕ್ಕಂತೆ ಆಧುನಿಕ ತಂತ್ರಜ್ಞಾನದ ಸಲಕರಣೆಗಳನ್ನು ಒದಗಿಸಿ, ಅವರು ತಯಾರಿಸಿದ ಉತ್ಪನ್ನಗಳಿಗೆ ಸೂಕ್ತ ಸರ್ಕಾರಿ ಖರೀದಿ ವ್ಯವಸ್ಥೆ ಹಾಗೂ ಮಾರುಕಟ್ಟೆ ಸಂಪರ್ಕವನ್ನು ಕಲ್ಪಿಸಿಕೊಡಲಾಗಿತ್ತು.

ಮುಖ್ಯ ಗುರಿ ಗ್ರಾಮೀಣ ಭಾಗದ ಗುಡಿ ಕೈಗಾರಿಕೆಗಳು, ನೇಕಾರರು ಮತ್ತು ಹಳ್ಳಿಗಳ ಸಾಂಪ್ರದಾಯಿಕ ಕುಶಲಕರ್ಮಿಗಳು.
ಸಾಮಾಜಿಕ-ಆರ್ಥಿಕ ಪರಿಣಾಮ ಈ ದೂರದೃಷ್ಟಿಯ ಯೋಜನೆ ಹಳ್ಳಿಗಳ ಜನ ಉದ್ಯೋಗಕ್ಕಾಗಿ ನಗರಗಳಿಗೆ ವಲಸೆ ಹೋಗುವುದನ್ನು ತಪ್ಪಿಸಿತ್ತು ಮತ್ತು ನಮ್ಮ ಸಾಂಪ್ರದಾಯಿಕ ಗುಡಿ ಕೈಗಾರಿಕೆಗಳಿಗೆ ಆಧುನಿಕತೆಯ ಸ್ಪರ್ಶ ನೀಡಿತ್ತು.
Ganga Kalyana Scheme

ಗಂಗಾ ಕಲ್ಯಾಣ ಯೋಜನೆ

ಕೃಷಿ ಸ್ವಾವಲಂಬನೆಯನ್ನು ಸಾಧಿಸಲು ಗ್ರಾಮೀಣ ಭಾಗಕ್ಕೆ ನೀರಾವರಿ ಸೌಲಭ್ಯ ಒದಗಿಸುವ ಐತಿಹಾಸಿಕ ಕ್ರಮ.

ಅನಿಶ್ಚಿತ ಮುಂಗಾರು ಮಳೆ ಮತ್ತು ಖಾಸಗಿಯವರ ಹಿಡಿತದಲ್ಲಿದ್ದ ನೀರಿನ ಮೂಲವನ್ನು ಅವಲಂಬಿಸಿ, ಶೋಷಣೆಗೆ ಒಳಗಾಗುತ್ತಿದ್ದ ಸಣ್ಣ ಮತ್ತು ಅತಿ ಸಣ್ಣ ರೈತರ ಸಂಕಷ್ಟಕ್ಕೆ ಸ್ಪಂದಿಸಿ ಶ್ರೀ ಎಸ್. ಬಂಗಾರಪ್ಪನವರು ನೀರಾವರಿ ಮೂಲಸೌಕರ್ಯ ಒದಗಿಸುವ ಈ ಐತಿಹಾಸಿಕ ಯೋಜನೆಯನ್ನು ಜಾರಿಗೆ ತಂದರು. ಈ ಯೋಜನೆಯಡಿ, ಆರ್ಥಿಕವಾಗಿ ಹಿಂದುಳಿದ, ಶೋಷಿತ ಮತ್ತು ಅಲ್ಪಸಂಖ್ಯಾತ ಸಮುದಾಯದ ರೈತರಿಗೆ ಕೊಳವೆಬಾವಿಯನ್ನು ಕೊರೆದು, ಪಂಪ್ ಮೋಟಾರ್ ಹಾಗೂ ವಿದ್ಯುದ್ಧೀಕರಣ ಮಾಡಿ ನೀರನ್ನು ಒದಗಿಸಲಾಗುತ್ತದೆ, ಈ ಯೋಜನೆಯು ಸಂಪೂರ್ಣ ಸಹಾಯಧನದ ಯೋಜನೆಯಾಗಿದೆ.

ಮುಖ್ಯ ಗುರಿ ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST) ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿದ ಸಣ್ಣ ಮತ್ತು ಅತಿ ಸಣ್ಣ ರೈತರು.
ಸಾಮಾಜಿಕ-ಆರ್ಥಿಕ ಪರಿಣಾಮ ಖುಷ್ಕಿ ಜಮೀನುಗಳು ಬಹುವಿಧದ ಬೆಳೆ ಬೆಳೆಯುವ ಸಮೃದ್ಧ ಕೃಷಿ ವಲಯಗಳಾಗಿ ರೂಪಾಂತರಗೊಂಡಿತು..
Free Power Mandate

ಉಚಿತ ವಿದ್ಯುತ್ ಆದೇಶ

ಗ್ರಾಮೀಣ ಕೃಷಿ ಆರ್ಥಿಕತೆಯನ್ನು ಸಾಲದ ಸುರುಳಿಯಿಂದ ಮುಕ್ತಗೊಳಿಸಿದ ಐತಿಹಾಸಿಕ ತೀರ್ಮಾನ.

ಇಡೀ ದೇಶಕ್ಕೇ ಮಾದರಿಯಾಗುವಂತಹ ಅತ್ಯಂತ ಮಹತ್ವದ ನಿರ್ಧಾರವನ್ನು ಶ್ರೀ ಎಸ್. ಬಂಗಾರಪ್ಪನವರ ಸರ್ಕಾರವು ಕೈಗೊಂಡು, 10 ಹೆಚ್‌ಪಿ (HP) ವರೆಗಿನ ಕೃಷಿ ನೀರಾವರಿ ಪಂಪ್‌ಸೆಟ್‌ಗಳಿಗೆ ಭಾರಿ ಸಬ್ಸಿಡಿ ಹಾಗೂ ಉಚಿತ ವಿದ್ಯುತ್‌ ಒದಗಿಸಿತ್ತು. ಸಣ್ಣ ರೈತರ ಕೃಷಿ ವೆಚ್ಚದಲ್ಲಿ ಪ್ರತಿ ತಿಂಗಳು ದೊಡ್ಡ ಖರ್ಚಿನ ಮೊತ್ತವಾಗಿದ್ದ ವಿದ್ಯುತ್ ಬಿಲ್‌ನ ಹೊರೆಯನ್ನು ಇಳಿಸಲಾಗಿತ್ತು. ಇದರಿಂದ ಕೃಷಿ ನಿರ್ವಹಣಾ ವೆಚ್ಚ ಬಹಳಷ್ಟು ಕಡಿಮೆಯಾಗಿತ್ತು. ಇದರಿಂದಾಗಿ ಮಳೆ ಕಡಿಮೆಯಾದಾಗ ಲಕ್ಷಾಂತರ ಕೃಷಿ ಕುಟುಂಬಗಳು ಸ್ಥಳೀಯ ಲೇವಾದೇವಿದಾರರಿಂದ ಸಾಲಪಡೆದು,ಅದರ ಸುಳಿಯಲ್ಲಿ ಸಿಲುಕಿ ತೊಂದರೆಗೊಳಗಾಗುವುದನ್ನು ತಪ್ಪಿಸಿತ್ತು.

ಮುಖ್ಯ ಗುರಿ ರಾಜ್ಯಾದ್ಯಂತ ನೀರಾವರಿ ಪಂಪ್‌ಸೆಟ್‌ ಹಾಗೂ ಯಂತ್ರೋಪಕರಣ ಬಳಸುವ ಸಣ್ಣ ಮತ್ತು ಮಧ್ಯಮ ಗಾತ್ರದ ಕೃಷಿಕರು.
ಸಾಮಾಜಿಕ-ಆರ್ಥಿಕ ಪರಿಣಾಮ ಈ ಮೂಲಭೂತ ಹಕ್ಕಿನ ಸೌಕರ್ಯದಿಂದಾಗಿ ಆಹಾರ ಉತ್ಪಾದನೆಯಲ್ಲಿ ಸ್ಥಿರತೆ ಸಾಧ್ಯವಾಯಿತು ಮತ್ತು ಕೃಷಿಕರ ಖರ್ಚು ಕಡಿಮೆಯಾಯಿತು.
ವಂಶದ ನಿರಂತರತೆ

ಮುಂದುವರಿದ ವೈಚಾರಿಕ ಪರಂಪರೆ

ಶ್ರೀ ಎಸ್. ಬಂಗಾರಪ್ಪನವರ ಆಡಳಿತದ ಮೌಲ್ಯಗಳು ಮತ್ತು ಸಾಮಾಜಿಕ ನ್ಯಾಯದ ಸಿದ್ಧಾಂತಗಳು, ಇಂದು ಶ್ರೀ ಮಧು ಬಂಗಾರಪ್ಪನವರು ಮುನ್ನಡೆಸುತ್ತಿರುವ ಆಧುನಿಕ ಆಡಳಿತದ ವಿಧಾನಕ್ಕೆ ಹಾಗೂ ಜನಪರ ಯೋಜನೆಗಳಿಗೆ ಹೇಗೆ ನೇರ ಸ್ಫೂರ್ತಿಯಾಗಿವೆ ಎಂಬುದರ ಪಕ್ಷಿನೋಟ

ಶ್ರೀ ಎಸ್. ಬಂಗಾರಪ್ಪನವರ ಮೂಲ ಸಿದ್ಧಾಂತ
ಶ್ರೀ ಮಧು ಬಂಗಾರಪ್ಪನವರ ಮುಂದುವರಿದ ಹೆಜ್ಜೆ
ಕಟ್ಟಕಡೆಯ ವ್ಯಕ್ತಿಗೂ ಮೂಲಸೌಕರ್ಯದ ಗುರಿ

ಸಮಾಜದ ತಳಮಟ್ಟದ ಜನರ ಏಳಿಗೆಯೇ ರಾಜ್ಯದ ಅಭಿವೃದ್ಧಿ ಎಂದು ನಂಬಿದರು. ಹೀಗಾಗಿಯೇ ಇವರಿಗೆ ಸ್ವಂತ ಮನೆ ಸೇರಿದಂತೆ ಅಗತ್ಯ ಸೌಕರ್ಯ ಒದಗಿಸಲು ಕ್ರಾಂತಿಕಾರಕವಾದ ಯೋಜನೆಗಳನ್ನು ರೂಪಿಸಿ ಜಾರಿಗೆ ತಂದರು.

ಸರ್ವರಿಗೂ ಶೈಕ್ಷಣಿಕ ಭದ್ರತೆ ಒದಗಿಸಲು ಕ್ರಮ

ಸರ್ಕಾರಿ ಶಾಲೆಗಳ ಸುಧಾರಣೆಗೆ 8 ಗ್ಯಾರಂಟಿಗಳನ್ನು ಪ್ರಕಟಿಸುವ ಮೂಲಕ ಪ್ರತಿಯೊಬ್ಬರಿಗೂ ಉಚಿತವಾಗಿ, ಗುಣಮಟ್ಟದ ಶಿಕ್ಷಣ ದೊರೆಯಬೇಕೆಂಬ ನಿಟ್ಟಿನಲ್ಲಿ ಕ್ರಮ ತೆಗೆದುಕೊಂಡರು. ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿಯಿಂದ ದ್ವಿತೀಯ ಪಿಯುಸಿಯವರೆಗೆ ಎಲ್ಲಾ ವಿದ್ಯಾರ್ಥಿಗಳಿಗೂ ಪೌಷ್ಟಿಕ ಅಹಾರ ಒದಗಿಸಲು ಮುತುವರ್ಜಿ ತೋರಿದರು.

ಗ್ರಾಮೀಣ ಯುವಜನರ ಸಬಲೀಕರಣ

ರಾಜ್ಯದ ಯುವಜನರ ಸಬಲೀಕರಣ ಯೋಜನೆಗಳನ್ನು ಇತಿಹಾಸದಲ್ಲಿಯೇ ಮೊದಲ ಬಾರಿಗೆ ಜಾರಿಗೆ ತಂದು, ಗ್ರಾಮೀಣ ಭಾಗದ ಯುವ ಜನರ ಆತ್ಮವಿಶ್ವಾಸ ಹೆಚ್ಚಿಸಿದರು. ನಗರದ ಯುವಜನರೊಂದಿಗೆ ಸಮಾಜಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಸಮಾನವಾಗಿ ಸ್ಪರ್ಧೆಗಿಳಿಯಲು ಸಾಧ್ಯವಾಗುವಂತೆ ನೋಡಿಕೊಂಡರು.

ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ಶಿಕ್ಷಣ

ಖಾಸಗಿ ಶಾಲೆಗಳ ಗುಣಮಟ್ಟಕ್ಕೆ ಸರಿಸಾಟಿಯಾಗುವಂತೆ ಅಗತ್ಯ ಎಲ್ಲಾ ಮುಲ ಸೌಕರ್ಯಗಳನ್ನು ಹೊಂದಿರುವ 800 ರಿಂದ 1000 ಕೆಪಿಎಸ್‌ ಶಾಲೆಗಳನ್ನು ಆರಂಭಿಸಲು ಕ್ರಮ ತೆಗೆದುಕೊಂಡರು. ಈ ಶಾಲೆಗಳಲ್ಲಿ ಮತ್ತು ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ಬೋಧನೆ ಆರಂಭಿಸಿದರು.

ತಂತ್ರಜ್ಞಾನದ ಮೂಲಕ ಅಸಮಾನತೆ ನಿವಾರಣೆ

ಸಾಂಪ್ರದಾಯಿಕ ಕುಶಲ ಕರ್ಮಿಗಳಿಗೆ, ಗೃಹ ಕೈಗಾರಿಕೆಗಳಿಗೆ ಆರ್ಥಿಕ ಬಲ ತುಂಬುವ ಮೂಲಕ ಗ್ರಾಮೀಣ ಆರ್ಥಿಕತೆಗೆ ಬಲ ತುಂಬಿದರು. 'ವಿಶ್ವ' ಯೋಜನೆ ಮೂಲಕ ಆಧುನಿಕ ಸೌಕರ್ಯಗಳನ್ನು ಒದಗಿಸಿದ್ದಲ್ಲದೆ, ಮಾರುಕಟ್ಟೆ ಸೌಕರ್ಯಗಳ ವೇದಿಕೆ ಕಲ್ಪಿಸಿದ್ದರು.

ಡಿಜಿಟಲ್ ಮತ್ತು ಎಐ (AI) ಕಲಿಕೆಸುವ ಗ್ಯಾರಂಟಿ

ಸರ್ಕಾರಿ ಶಾಲೆಗಳಲ್ಲಿ 1ನೇ ತರಗತಿಯಿಂದಲೇ ಕಂಪ್ಯೂಟರ್ ಕಲಿಸಲು ಕ್ರಮ ತೆಗೆದುಕೊಂಡರು. 3 ನೇ ತರಗತಿಯಿಂದಲೇ ಎಐ ಕಲಿಸುವ ಮೂಲಕ ಗ್ರಾಮೀಣ ಮಕ್ಕಳೂ ಜಾಗತಿಕ ಸವಾಲುಗಳನ್ನು ಎದುರಿಸಲು ಸಜ್ಜಾಗುವಂತೆ ನೋಡಿಕೊಂಡರು.

ಮೀಡಿಯಾ ಲಾಂಜ್‌

ಕ್ರಿಯಾಶೀಲ ನಾಯಕತ್ವ

ಸಾರ್ವಜನಿಕರ ಅಭಿಪ್ರಾಯ

ಜನರ ಧ್ವನಿ

ಬಂಗಾರಪ್ಪ ಅವರು ಜನಸಾಮಾನ್ಯರ ನಡುವೆ ಬೆಳೆದ ನಾಯಕರು. ಬಡವರು, ಸಣ್ಣ ರೈತರು ಹಾಗೂ ಹಿಂದುಳಿದ ಸಮುದಾಯಗಳ ಕಲ್ಯಾಣದ ಮೇಲಿನ ಅವರ ಬದ್ಧತೆ ಸಂಪೂರ್ಣವಾಗಿತ್ತು. ಗ್ರಾಮೀಣ ಕರ್ನಾಟಕದ ಜನಮನವನ್ನು ಅವರು ವಿರಳ ನಾಯಕರಂತೆ ಅರ್ಥಮಾಡಿಕೊಂಡಿದ್ದರು. ಅವರ ರಾಜಕೀಯ ನಿರ್ಧಾರಗಳಲ್ಲಿ ಸಾಮಾನ್ಯ ಜನರ ಹಿತವೇ ಯಾವಾಗಲೂ ಮೊದಲ ಆದ್ಯತೆಯಾಗಿತ್ತು.

H.D. Deve Gowda
ಎಚ್.ಡಿ. ದೇವೇಗೌಡ ಭಾರತದ ಮಾಜಿ ಪ್ರಧಾನಮಂತ್ರಿ

ಎಸ್. ಬಂಗಾರಪ್ಪ ಅವರು ನಿರ್ಭೀತ ನಾಯಕರು. ಬಡವರ ಮನೆಬಾಗಿಲಿಗೆ ತಲುಪಿದ ಪರಿವರ್ತನಾತ್ಮಕ ಸಾಮಾಜಿಕ ಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದರು. ಆಶ್ರಯ (ಮನೆ ಇಲ್ಲದವರಿಗೆ ವಸತಿ) ಮತ್ತು ವಿಶ್ವ (ಗ್ರಾಮೀಣ ಕರಕುಶಲಗಾರರಿಗೆ ಆರ್ಥಿಕ ನೆರವು) ಯೋಜನೆಗಳ ಪರಿಚಯದ ಮೂಲಕ ಆಡಳಿತವನ್ನು ಸಾಮಾಜಿಕ ಸಮಾನತೆಯೊಂದಿಗೆ ನೇರವಾಗಿ ಜೋಡಿಸಬಹುದು ಎಂಬುದನ್ನು ಸಾಬೀತುಪಡಿಸಿದರು.

N. Dharam Singh
ಎನ್. ಧರಂ ಸಿಂಗ್ ಕರ್ನಾಟಕದ ಮಾಜಿ ಮುಖ್ಯಮಂತ್ರಿ

ಬಂಗಾರಪ್ಪ ಅವರು ಶೋಷಿತ ಜನರ ನಿಜವಾದ 'ಬಂಗಾರದ ಮನುಷ್ಯ' ಆಗಿದ್ದರು. ಇಂದಿನ ಕಲ್ಯಾಣ ಭರವಸೆಗಳು ಸಾಮಾನ್ಯವಾಗುವ ಮೊದಲೇ, ಆರಾಧನಾ ಯೋಜನೆ ಹಾಗೂ ರೈತರ ನೀರಾವರಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್‌ನಂತಹ ಐತಿಹಾಸಿಕ ನಿರ್ಧಾರಗಳನ್ನು ಧೈರ್ಯದಿಂದ ಜಾರಿಗೆ ತಂದರು. ಕರ್ನಾಟಕದಲ್ಲಿ ಬಡಪರ ಆಡಳಿತಕ್ಕೆ ಅವರು ಹೊಸ ಮಾನದಂಡವನ್ನು ನಿರ್ಮಿಸಿದರು.

Siddaramaiah
ಸಿದ್ದರಾಮಯ್ಯ ಕರ್ನಾಟಕದ ಮಾಜಿ ಮುಖ್ಯಮಂತ್ರಿ

ಅವರು ತಮ್ಮ ರಾಜಕೀಯ ನಂಬಿಕೆಗಳಿಂದ ಎಂದಿಗೂ ಹಿಂದೆ ಸರಿಯದ ಅಚಲ ಹೋರಾಟಗಾರರಾಗಿದ್ದರು. ಎಸ್. ಬಂಗಾರಪ್ಪ ಅವರ ಜನರೊಂದಿಗೆ ನೇರವಾಗಿ ಬೆರೆಯುವ ವಿಶಿಷ್ಟ ಸಾಮರ್ಥ್ಯವೇ ಅವರನ್ನು ಒಂದು ಸಂಸ್ಥೆಯನ್ನಾಗಿ ರೂಪಿಸಿತು. ಅವರ ಅಗಲಿಕೆಯಿಂದ ರಾಜ್ಯದ ನಾಯಕತ್ವದಲ್ಲಿ ಸುಲಭವಾಗಿ ತುಂಬಲಾಗದ ದೊಡ್ಡ ಶೂನ್ಯ ಉಂಟಾಗಿದೆ.

B.S. Yediyurappa
ಬಿ.ಎಸ್. ಯಡಿಯೂರಪ್ಪ ಕರ್ನಾಟಕದ ಮಾಜಿ ಮುಖ್ಯಮಂತ್ರಿ

ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಸಾರೆಕೊಪ್ಪ ಬಂಗಾರಪ್ಪನವರನ್ನು ಹೊರತು ಪಡಿಸಿ, ಕರ್ನಾಟಕದ ರಾಜಕೀಯ ಚರಿತ್ರೆ ಬರೆದರೆ ಅದು ಚರಿತ್ರೆಯೇ ಅಲ್ಲ. ಬದಲಿಗೆ ಅಪೂರ್ಣ ಇತಿಹಾಸ. ದೇವರಾಜ ಅರಸು ನಂತರ ನಾಡಿನ ಅಸಂಖ್ಯಾತ ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಕೆಲಸ ಮಾಡಿದ, ಜೀವನ ಪ್ರೀತಿಯ ರಾಜಕಾರಣಿ ಶ್ರೀ ಬಂಗಾರಪ್ಪನವರು

Dr. Chandrashekhar Kambar
ಡಾ. ಚಂದ್ರಶೇಖರ ಕಂಬಾರ ಜ್ಞಾನಪೀಠ ಪುರಸ್ಕೃತ ಸಾಹಿತಿ